PRASADINI AYURNIKETHANA

News & Events

Latest updates, announcements, and happenings at Prasadini Ayurnikethana.
Prasadini Ayur Nikethana

Upcoming events & Latest updates

Updates on treatments, programs, achievements, and community initiatives.
ಯಕ್ಷಗಾನ

ಯಕ್ಷ ಪ್ರಸಾದಿನೀ-2026

ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯು ಆಯುರ್ವೇದ ಕ್ಷೇತ್ರದಲ್ಲಿ ಸತತ ಹಲವು ವರ್ಷಗಳ ಸೇವೆಯನ್ನು ಸಲ್ಲಿಸಿದ್ದು, ಚಿಕಿತ್ಸೆಯಲ್ಲಿ ಸಂಗೀತ -ನಾಟ್ಯಗಳ ಮಹತ್ವವನ್ನು ಗುರುತಿಸಿ ಅಳವಡಿಸಿಕೊಂಡಿದೆ. ಆ ದಿಸೆಯಲ್ಲಿ, ಮನೋವಿಕಾಸಕ್ಕೆ ಹಾಗೂ ಮನೋದೈಹಿಕ ಆರೋಗ್ಯಕ್ಕೆ ಪೂರಕವಾಗಿ ,ಆಯುರ್ವೇದ ತಜ್ಞ ವೈದ್ಯ ಡಾ .ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಇವರ ನೇತೃತ್ವದಲ್ಲಿನ ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆ , (www.prasadini.com)
ನರಿಮೊಗರು, ಪುತ್ತೂರು ಇದರ ಆಶ್ರಯದಲ್ಲಿ"ಯಕ್ಷ ಪ್ರಸಾದಿನೀ-2026" ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ, ಮಾರ್ಚ್ 3,2026 ಮಂಗಳವಾರದಂದು ಸಂಜೆ 6.30 ಕ್ಕೆ ಸರಿಯಾಗಿ ನರಿಮೊಗರು ಶಾಲಾ ವಠಾರದಲ್ಲಿನ ಕ್ರೀಡಾಂಗಣದಲ್ಲಿ (ಕಾಣಿಯೂರು -ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಪುತ್ತೂರಿನ
ದರ್ಬೆಯಿಂದ 6 ಕಿ .ಮೀ.)ನಿರ್ಮಿಸಲಾದ ವಿದ್ಯುದ್ದೀಪಾಲಂಕೃತ ಭವ್ಯ ರಂಗ ಮಂಟಪದಲ್ಲಿ ಶ್ರೀ ಅನಂತ ಪದ್ಮನಾಭ ಯಕ್ಷಗಾನ ಮಂಡಳಿ, ಪೆರ್ಡೂರು ಇವರಿಂದ , ಪೌರಾಣಿಕ ಕಥಾನಕ" ಕಾರ್ತವೀರ್ಯ -ಚಕ್ರ ಚಂಡಿಕೆ" ಯಕ್ಷಗಾನ ಪ್ರದರ್ಶನ ನಡೆಯಲಿದೆ.ಉಚಿತ ಪ್ರವೇಶವಿದ್ದು, ಕಾರ್ಯಕ್ರಮವು ರಾತ್ರಿ ಒಂದು ಗಂಟೆಯವರೆಗೆ ಮುಂದುವರೆಯುವುದು. ಸರ್ವರಿಗೂ ಆದರದ ಸ್ವಾಗತ.

Dr. Raghavendra Prasad

ಆಯುರ್ವೇದ - ಆಶಾವಾದ

2025, ಡಿಸೆಂಬರ್ 25 ಗುರುವಾರದಂದು , ಸಂಜೆ 4.30 ಗಂಟೆಗೆ ನರಿಮೊಗರು ಗ್ರಾಮ ಪಂಚಾಯತ್ ಸಮೀಪದ ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯ ಯೋಗ ಹಾಲ್ ನಲ್ಲಿ , ಪ್ರಸಾದಿನೀ ಅಯುರ್ನಿಕೇತನ ಆಯುರ್ವೇದ ಆಸ್ಪತ್ರೆ ಪ್ರಕಾಶನದಲ್ಲಿ ಪ್ರಕಟವಾದ, ಖ್ಯಾತ ಆಯುರ್ವೇದ ತಜ್ಞ ವೈದ್ಯ ಡಾ .ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಬರೆದ" ಆಯುರ್ವೇದ - ಆಶಾವಾದ " ಕೃತಿ ಲೋಕಾರ್ಪಣಾ ಸಮಾರಂಭ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ನೇತೃತ್ವದಲ್ಲಿ ನಡೆಯಿತು. ದೀಪ ಪ್ರಜ್ವಲನೆಯನ್ನು ಶ್ರೀಮತಿ ಕಾಂಚನಮಾಲಾ, ಸಿಂದೂರ ಮನೆ, ನಡೆಸಿಕೊಟ್ಟರು. ಅಧ್ಯಕ್ಷತೆಯನ್ನು ಪುತ್ತೂರು ಉಮೇಶ್ ನಾಯಕ್, ಅಧ್ಯಕ್ಷರು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಇವರು ವಹಿಸಿಕೊಂಡಿದ್ದರು ಮತ್ತು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಡಾ. ಬಂಗಾರಡ್ಕ ಇವರ ಈ ಕೃತಿ ಅತ್ಯಮೂಲ್ಯ ಕೊಡುಗೆ ಎಂದರು. ಶ್ರೀ ಅವಿನಾಶ್ ಕೊಡೆಂಕಿರಿ, ಸರಸ್ವತಿ ವಿದ್ಯಾಸಂಸ್ಥೆ, ನರಿಮೊಗರು ಇವರು ಮಾತನಾಡಿ " ಡಾ . ಬಂಗಾರಡ್ಕ ಇವರ ವೈದ್ಯಕೀಯ ಕೌಶಲ್ಯ , ಬರಹ ಮತ್ತು ವಾಗ್ಮಿತೆ ಒಂದು ಅಪರೂಪದ ಸಂಯೋಗ" ಎಂದರು. ಶ್ರೀ ಕೆ.ಪದ್ಮನಾಭ ಪ್ರಭು ಬೀರ್ನಹಿತ್ಲು, ಅದ್ಯಕ್ಷರು, ಶ್ರೀ ಗುರು ಪೂರ್ಣಾನಂದ ಭಜನಾ ಮಂದಿರ ಪುರುಷರಕಟ್ಟೆ, ನಿವೃತ್ತ ದೈಹಿಕ ಶಿಕ್ಷಕ ಶ್ರೀನಿವಾಸ್. ಹೆಚ್. ಬಿ. ಇವರು ಉಪಸ್ಥಿತರಿದ್ದು ಶುಭನುಡಿಗಳನ್ನಾಡಿದರು.
ಕೃತಿ ಲೋಕಾರ್ಪಣೆಯನ್ನು ಡಾ. ಸೀತಾರಾಮ ಭಟ್ ಕಲ್ಲಮ ವೈದ್ಯರು, ರೋಟರಿ ಬ್ಲಡ್ ಬ್ಯಾಂಕ್ ಮೆಡಿಕಲ್ ಆಫೀಸರ್ ಹಾಗೂ ಆಡಳಿತ ವ್ಯವಸ್ಥಾಪಕರು, ಶ್ರೀ ಗುರು ರಾಘವೇಂದ್ರ ಮಠ, ಕಲ್ಲಮ ನೆರವೇರಿಸಿ ಮಾತನಾಡಿದರು -" ಮಕ್ಕಳ , ಮಹಿಳೆಯಯರ, ವೃದ್ಧರ ವಿವಿಧ ಕಾಯಿಲೆಗಳ ಬಗ್ಗೆ , ಆಯುರ್ವೇದ ಪರಿಹಾರ ಹಾಗೂ ಆರೋಗ್ಯ ಕ್ಷೇತ್ರದ ಪ್ರಚಲಿತ ವಿದ್ಯಮಾನಗಳ ಬಗ್ಗೆ ವಿವರಿಸುವ ಮಹೋನ್ನತ ಪುಸ್ತಕ ಇದಾಗಿದೆ " ಎಂದರು .. ಕೃತಿಕಾರರ ಮತ್ತು ಅತಿಥಿಗಳ ಪರಿಚಯವನ್ನು ಶ್ರೀಮತಿ ಶರಾವತಿ ರವಿನಾರಾಯಣ, ಆರ್ಟ್ ಆಫ್ ಲಿವಿಂಗ್ ತರಬೇತುದಾರರು,
ಪ್ರಾರ್ಥನೆಯನ್ನುಕು.ಸುದಿಕ್ಷ ಮತ್ತು ಕು.ಸುನಿಧಿ, ಸ್ವಾಗತ ಭಾಷಣವನ್ನು ಶ್ರೀ ನಾರಾಯಣ ಬನ್ನಿಂತಾಯ, ನರಿಮೊಗರು ನಡೆಸಿಕೊಟ್ಟರು. ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಪ್ರಾಸ್ತಾವಿಕ ಮಾತಾಡಿ" ಹೊರಗಿನ ಆರೋಗ್ಯವು ಒಳಗಿನ ಸ್ಥಿತಿಯನ್ನು ಅವಲಂಬಿಸಿದೆ. ಹೊರಗಿನ ಸಂಗತಿಗಳ ಮೇಲೆ ನಮ್ಮ ನಿಯಂತ್ರಣ ಇಲ್ಲ. ಆದರೆ ಒಳಗಿನ ವಿಷಯಗಳ ಮೇಲೆ ಹಿಡಿತ ಸಾಧ್ಯ. ಪ್ರಸಾದಿನೀ ಆಯುರ್ನಿಕೇತನ ಆಸ್ಪತ್ರೆ ಆಯುರ್ವೇದ ಚಿಕಿತ್ಸೆಯಲ್ಲಿ ವಿವಿಧ ಸೌಲಭ್ಯಗಳನ್ನು ಅಳವಡಿಸಿಕೊಂಡಿದೆ" ಎಂದರು.
ನಿವೃತ್ತ ಯೋಧ ವಳಲಂಬೆ ಗಣಪಯ್ಯ ಭಟ್ ಕುಕ್ಕುಜೆ ಇವರನ್ನು ಸನ್ಮಾನಿಸಲಾಯಿತು.
ವಂದನಾರ್ಪಣೆ ಯನ್ನು ಡಾ. ಶ್ರುತಿ. ಎಂ. ಎಸ್., ಕಾರ್ಯಕ್ರಮ ನಿರೂಪಣೆಯನ್ನು ಶ್ರೀ ತಾರಾನಾಥ್ ಸವಣೂರು, ಜಿಲ್ಲಾ ಪ್ರಶಸ್ತಿ ವಿಜೇತ ಶಿಕ್ಷಕರು ಹಾಗೂ ಮುಖ್ಯ ಗುರುಗಳು , ಪಿ. ಎಂ. ಶ್ರೀ. ಶಾಲೆ, ವೀರಮಂಗಲ ನಡೆಸಿಕೊಟ್ಟರು. ಶ್ರೀಶ, ಪ್ರದೀಪ ಕೃಷ್ಣ ಬಂಗಾರಡ್ಕ , ಸುಲೋಚನಾ. ಪಿ. ಕೆ ., ಟಿ . ಎಸ್. ಆಚಾರ್, ಮುಖ್ಯ ಜೀವವಿಮಾ ಸಲಹೆಗಾರ ಎಂ. ಎಸ್. ಭಟ್ ಅತಿಥಿಗಳಿಗೆ ಹೂಗುಚ್ಛ ನೀಡಿ ಗೌರವಿಸಿದರು . ಉತ್ತಮ ಕೃಷಿಕ ಪ್ರಶಸ್ತಿ ವಿಜೇತ ಎಕ್ಕಡ್ಕ ಗಣಪತಿ ಭಟ್, ಸಂಗೀತಗಾರರಾದ ದತ್ತಾತ್ರೇಯ ರಾವ್, ಕುಟ್ಟಿಗದ್ದೆ ಜನಾರ್ಧನ ಜೋಯಿಸ್, ಗೋಪಾಲಕೃಷ್ಣ ಭಟ್ ಕುರಿಯ ಮತ್ತಿತರರು ಉಪಸ್ಥಿತರಿದ್ದರು.

Dr. Raghavendra Prasad

General

Our Therapies

Authentic Ayurvedic therapies that detoxify, rejuvenate, and restore balance naturally.

Our Treatments

Specialized programs like Swarna Prashanan, Abhyanga, and Panchakarma for holistic healing.

Our Expert Team
Experienced doctors and therapists offering personalized care with a healing touch.
Our Yoga Sessions
Individual and Group Sessions are available
Meditation Classes
Tripura Purification Approach Developed by Prasadini

CALL US

+91 974 054 5979

OUR LOCATION

Near Narimogaru Gram Panchayat, Narimogru, Karnataka, INDIA 574202

SHOP ONLINE

Pure. Natural. Trusted Ayurveda Medicine